ಬೆಳೆಯುವ ಸಿರಿ ಮೊಳಕೆಯಲ್ಲಿ ಈ ಗಾದೆ ನೀವು ಕೇಳಿಯೇ ಇರುತ್ತಿರಿ ಆದರೆ ಬೇಳೆಯುತ್ತಲೇ ಒಂದೇ ವರ್ಷದಲ್ಲಿ ೩ ದಾಖಲೆ ಮಾಡಿದ ಪೋರಧಿರನ ಹೆಸರು ಅಭಿಷೆಕ ನವಲೆ. ಈತ ವಿಶ್ವದಾಖಲೆ ಮಾಡಿದಾಗ ಕೇವಲ ೩ನೇ ತರಗತಿಯಲ್ಲಿ ಇದ್ದ .ನಂಬಲು ಸಾಧ್ಯವಿಲ್ಲ ಆದರು ಸತ್ಯ .ಈತ ಸಾಧನೆ ಮಾಡಿದದ್ದು ಸ್ಕೇಟಿಂಗನಲ್ಲಿ . ಅಭಿಷೆಕ ಜನಿಸಿದ್ದು ಡಿಸೆಂಬರ ೯ರಂದು. ತಂದೆ ಸಂಜಯ ಸದಾಶಿವ ನವಲೆ ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದವರು . ಬೆಳಗಾವಿ ಸಾರಿಗೆ ಸಂಸ್ಠೆಯ ೨ನೆಘಟಕ ಬಸ್ ಚಾಲಕರಾಗಿ ಗುತ್ತಿಗೆ ಆಧಾರದ್ ಮೇಲೆ ಕಾರ್ಯನಿವ್ರ್ಯಿಸುತಿದ್ದಾರೆ .ತಾಯಿ ಸುಜಾತ ಗ್ರಹಣಿ, ಜೋತಗೆ ಉತ್ತಮ ಕ್ರೀಡಾಪಟು ಅಭಿ ಕನಿಗೆ ಬಾಲ್ಯದಿಂದಲೇ ರೋಲರ್ ಸ್ಕೇಟಿಂಗ್ ತರಬೇತಿ ನೀಡುವತ್ತ ಗಮನ ಹರಿಸಿ, ಕುಟುಂಬದ ಬೇಕು - ಬೇಡಗಳನ್ನು,ಆರ್ಥಿಕ ಮುಗ್ಗಟ್ಟನ್ನು ಬದಿಗಿರಿಸಿ ಮಗನ ಕ್ರೀಡಾ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
’ಬೆಳಾಗಾವಿ ರೋಲರ್ ಸ್ಕೇಟಿಂಗ್ ಅಕಡಮಿ’ ಸೇರಿದ ಕೆಲವೇ ದಿನಗಳಲ್ಲಿ ಸ್ಕೇಟಿಂಗ್ ಮೇಲೆ ಪ್ರಭುತ್ವ ಸಾಧೀಸಿದ ಅಭಿ ಕ್, ಮುಂದಿನ ದಿನಗಳಲ್ಲಿ ಅದ್ಭುತ ಸಾಧನೆ ತೋರುವ ಕುರುಹು ಆಗಲೇ ತೋರಿದ್ದಾನೆ. ಸ್ಕೇಟಿಂಗ್ ತರಬೇತುದಾರರಾದ ಸೂರ್ಯಕಾಂತ ಹಿಂಡಲಗೇಕರ್, ಶಶಿಧರ, ವಿನಯಕ ಶಿರಿಕರ,ನವೀನ ಗೋಡಕೆ ಹಾಗೂ ವಿಶಾಲ್ ಮೊದಲಾದವರು ಗರಡಿಯಲ್ಲಿ ಪಳಗಲಾರಂಭಿಸಿದ.ಅಭಿ ಕನ ಸಾಧನೆಗಾಗಿ ನವಲೆ ದಂಪತಿ ತಮ್ಮ ಮನೆಯ ಹಕ್ಕು ಪತ್ರಗಳನ್ನೂ, ಮೈಮೇಲಿರುವ ಆಭರಣಗಳನ್ನೂ, ಸಾಲಾಕ್ಕಾಗಿ ಬ್ಯಾಂಕನಲ್ಲಿ ಅಡವಿರಿಸಿದ್ದಾರೆ. ಹೀಗೆ ಆರ್ಥಿಕ ಮುಗ್ಗಟ್ತಿನಲ್ಲೂ ದೇಶಕ್ಕೆ ಉತ್ತಮ ಆಟಗಾರನನ್ನು ಕೊಟ್ಟ ಹೆಮ್ಮೆ ಅಭಿ ಕನ ಕುಂಟುಂಬದ್ದು.
ಹೇತ್ತವರ ಪ್ರರಿಶ್ರಮದಿಂದ ೭ ವಯಸ್ಸಿನಲ್ಲಿ ೩ ವಿಶ್ವದಾಖಲೆಗಳನ್ನು ಮಾಡಿದ್ದಾನೆ.ರಾಷ್ತ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಸಾಧಕನಾಗಿ ಹೋರ ಹೋಮ್ಮಿದ್ದಾನೆ.ಮಾಹಾಂತೇಶ ನಗರದ ಎವಿಎಚ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಒದುತ್ತಿರುವ ಅಭೀ.ಶಾಲೆಯ ಆಡಳಿತಮಂಡಳಿ ಉಚಿತ ಶಿಕ್ಸಣ ನೀಡಲು ಮುಂದಾಗಿದೆ.
ಗೌರವ
ಅಭಿಷೇಕನಿಗೆ ಕರ್ನಾಟಕ ಸರಕಾರದಿಂದ ಕೋಡಲಾಗುವ ಪ್ರತಿಷ್ಠತ ಬಾಲ ಪ್ರತಿಭೆ ೨೦೦೮ ಪ್ರಶಸ್ತಿ ದೋರೆತಿದೆ .ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವನ ರೋಲರ್ ಸ್ಕೇಟಿಂಗ ಸಾಧನೆ ಪರಿಗಣಿಸಿ ಸಾರಕಾರದ ವತಿಯಿಂದ ಸನ್ಮಾನಿಸಿದ್ದಾರೆ . ಮೈಸೂರ ದಸಾರ ಉತ್ಸವದ ಸಂಧರ್ಭದಲ್ಲಿ ಗಣ್ಯರು ಗೌರವಿಸಿದ್ದಾರೆ.ಕೊಲ್ಲಪುರದಲ್ಲಿ ರಾಷ್ಟ್ರಮಟ್ಟದ ಬಾಲ ಸ್ಕೇಟಿಂಗ ಸ್ಪರ್ಧೆಯಲ್ಲಿ ೩ನೇಸ್ಥಾನ ಬೆಳಗಾವಿ ರೋಲರ್ ಸ್ಕೇಟಿಂಗ ಛಾಂಪಿಯನ್ ಶಿಫ್ ೨೦೦೮ -೦೯ರ ಪ್ರಶಸ್ತಿ,ಇದರ ಬೆನ್ನಲ್ಲೇ ಮೈಸೂರು ಛಾಂಪಿಯನ್ ಶಿಪ್ ೨೦೦೯ ಪ್ರಶಸ್ತಿ,ವಿಜಾಪುರದಲ್ಲಿ ೨೦೦೯ರಲ್ಲಿ ರಾಜ್ಯಮಟ್ಟದ ಆದರ್ಶ ಕ್ರೀಡಾಪಟ್ಟು ಪ್ರಶಸ್ತಿ ಅಭಿಷೇಕನ ಕೀರಿಟದ ಗರಿಗಳು .ಬೆಳಾಗಾವಿಯಲ್ಲಿ ನಡೆಸಲಾದ ಭಯೋತ್ಪಾದನೆ ವಿರೋಧಿ ಸ್ಕೇಟಿಂಗ ರಾಲಿ ಹಾಗೂ ರಕ್ತದಾನ ಮಹಾದಾನ ಎಂಬ ರಾಲಿಯಲ್ಲಿ ಭಾಗವಹಿಸುವ ಅವಕಾಶ ನೀಡಿ ಸ್ಥಳಿಯ ಸಂಸ್ಥೆಗಳು ಅಭಿಷೆಕನಿಗೆ ಗೌರವಿಸಿವೆ. ಈತನ ಸ್ಕೇಟಿಂಗ ಸಾಧನೆಗೆ ರಾಜ್ಯ .ರಾಷ್ಟ್ರದೆಲ್ಲಡೆಯಿಂದ ೯೦ಕ್ಕೂ ಹೆಚ್ಚೂ ಪ್ರಶಸ್ತಿಗಳು ಪೋರನ ಮಡಿಲಲ್ಲಿ ಇವೆ. ಆದರೂ ಅಭಿಷೆಕನಿಗೆ ತನ್ನ ಸಾಧನೆಯ ಬಗ್ಗೆ ಸಾಮಧನಾವಿಲ್ಲ .ಇನ್ನಷ್ಟು ಸಾಧಿಸುವ ಛಲ ಆತನದ್ದು. ಒಲಿಂಪಿಕ ಕ್ರಿಡೆಯಲ್ಲಿ ಭಾಗವಹಿಸುವ ತುಡಿತ ಆತನದ್ದು .
ತಂದೆ-ತಾಯಿ ಇಬ್ಬರು ಮಗನ ಸಾಧನೆ ಇನ್ನಷ್ಟು ಸಾಧಿಸಬೇಕು ಕನ್ನಡದ ಪತಾಕೆ ಜಗದಲಿ ಜಗಮಗಿಸುವಂತಾಗಲಿ ಎಂಬ ಅಭಿಲಾಷೆ ಅವರದ್ದು.ಆತನ ಸಾಧನೆಗೆ ಅಡ್ಡಿಯಾಗದಂತೆ ಎಚ್ಚರವಹಿಸಿದ್ದಾರೆ. ಇದ್ದಕ್ಕೆ ಯಾರದರು ಆರ್ಥಿಕ ನೆರವು ನೀಡಿ ಸಾಧನೇಗೆ ಇನ್ನಷ್ಟು ಪ್ರೋತ್ಸಹಿಸಿದರೆ ಛೋಲೋ ಆದಿತು.
ದಾಖಲೆ:
೧. ಬೆಂಗಳೂರನಿಂದ ಬೆಳಗಾವಿವರಗೆ ೫೪೦ಕೀಮಿ.ಅಂತರವನ್ನು ಸ್ಕೇಟಿಂಗ ಮೂಲಕ ೬ ದಿನಗಳಲ್ಲಿ ಪೋರೈಸಿ ನೂತನ ವಿಶ್ವದಾಖಲೆ
.ಆಗ ಕೇವಲ ೬ವರ್ಷ ೯ತಿಂಗಳು ೧೩ ದಿವಸ ಮಾತ್ರ. ಇದು ನಡೆದದ್ದು ೨೦೦೮ ಅಕ್ಟೋಬರ್ ತಿಂಗಳಲ್ಲಿ ಈ ಸಾಧನೆಯೋಂದಿಗೆ ಅತಿ ಕಿರಿಯ ವಯಸ್ಸಲ್ಲಿ ಅತಿ ಹೆಚ್ಚು ದೂರ ಕ್ರಮಿಸಿದ ಸ್ಕೇಟಿಂಗ ಎಂಬ ಗೌರವಕ್ಕೆ ಪಾತ್ರನಾದ .
೩. ೨೦೦೯ ಜುಲೈ ೧೦ ಟಾಟಾ ಸುಮೋ ವಾಹನಗಳ ನಡುವಿನ ೬೫ಅಡಿ ಅಂತರವನ್ನು ಕೇವಲ ೭.೬೭ಸೇಂಕಡುಗಳಲ್ಲಿ ಕ್ರಮಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿ "ವಂಡರ್ ಬಾಯ್ " ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಒಂದೇ ವರ್ಷದ ಅವಧಿಯಲ್ಲಿ ೩ ವಿಶ್ವದಾಖಲೆ ನಿರ್ಮಿಸಿದ್ದು ದೋಡ್ಡ ಸಾಧನೇ ಅದರಲ್ಲೂ ವಿಶೇಷವಾಗಿ ಕಿರಿಯ ವಯಸ್ಸಿನಲ್ಲಿ ಈ ಹಿರಿಯ ಸಾಧನೆ ಗಮನಾರ್ಹ . ಈ ೩ ದಾಖಲೆ ವಿಶ್ವದಾಖಲೆ .ವಿಶ್ವದಾಖಲೆ ಅಕಾಡೆಮಿ ಮ್ಯಾನ ಮಾಡಿದೆ.